Wednesday, April 1, 2020

ಕೋರೋಣ

ಪೋಲಿಸ್ ದೇವರು
ಮಾಡಿದ  ತಪ್ಪೇ ನ್ರಪ್ಪ.

ಅವರು ಕೂಡ
ಮನುಷ್ಯರೇ ಅಲ್ವೇನ್ರಪ್ಪ.

ಕೊರೋನ ಅಂಟಿದ
ಬಂಧುಗಳೇ ಕೇಳ್ರಪ್ಪ.

ಮನಸ್ಸನ್ನ ಗಟ್ಟಿ ಮಾಡಿ
ಮನೆಯಲ್ಲೇ ಕೊಡ್ರಪ್ಪ.

ಒಳ್ಳೆ ಕಾಲ ಬೇಗ ಬೇಗ
ಬಂದೇ ಬಿಡುತೈತಪ್ಪ.

ನಮಗೆಲ್ಲಾ ಮೂಡಿಸಲ್ಲಿಕ್ಕೆ ಅರಿವು
ನಾಟಕ ಮಾಡ್ತಾ, ಹೇಳ್ತಾರಲ್ಲ ಹಾಡು.

 ಕೊರೋನ ಬರುತ್ತೆ ಬೀದಿಗೆ ಬರಬೇಡಿ
ಕೂಗಿ ಕೂಗಿ ಹೇಳ್ತಾರಲ್ಲ ಪೋಲಿಸ್ ಅಣ್ಣವೃ.

ಸಾಮಾಜಿಕ ಅಂತರ ಕಾಪಾಡಿ ಅಂತ
ರಸ್ತೆಗಿಳಿದರೆ ಬಸ್ಕಿ ಹೊಡೆಸಿ ಕೈಮುಗಿ ತಾರಪ್ಪ.

ಮನೆಯೊಳಗಿರಲಿ ಅಂತ ಗಿಣಿಗೇಳ್ದ0ಗೆ ಹೇಳಿ
ಬೀದಿಗೆ ಬಂದವರಿಗೆ ಕುಂಕುಮ ಇಟ್ಟು ಮಂಗಳಾರತಿ ಮಾಡ್ತಾರಪ್ಪ.


ಸೋಂಕಿತರ ಮನೆಮನೆ ಬೀದಿ ಬೀದಿ
ಕಾಯ್ತಾರಲ್ಲ ರಕ್ಷಕರು.

ನಮ್ಮ ಅಣ್ಣ ,ತಮ್ಮ ,ತಂದೆ
ಅಕ್ಕ ,ತಂಗಿ ,ಅಮ್ಮ  ಪೊಲೀಸ್ ಆಗಿದ್ದಾರೆ
ಅಂದುಕೊಳ್ಳೋಣ ಎಲ್ಲರೂ.

ಬಿಸಿಲು ನೆರಳು ಕಾಯಿಲೆ ಅನ್ನದೆ
ಮಾಡ್ತಾರಲ್ಲ ಸೇವೆ.

ಏನ್ ಮಾಡಿದ್ರು ತಪ್ಪು ಅಂತ
ಕಾಮಾಲೆ ಕಣ್ಣು   ಬ್ಯಾಡ್ರಪ್ಪ.

ಕೈಮುಗಿದು  ಬೇಡಿಕೊಳ್ತೀನಿ
ಅವರ ಸೇವೆ ಕಮ್ಮಿ ಮಾಡೋಣ.

ಮನೆಯಲ್ಲಿ ಇರೋಣ
ಮಾನವರಾಗೋಣ.











1 comment:

  1. ಕರೋನ ವಿರುದ್ಧ ಯುದ್ಧಕ್ಕೆ ಪ್ರತಿ ಮಹಿಳೆಯೊ ವೀರ ವನಿತೆಯಾಗಬೇಕಿದೆ... ಕವನ ಇಲ್ಲಿ ಕನ್ನಡ ಪ್ರಕಟವಾಗಿದೆ.

    ReplyDelete